Advertisement

Thekkatte ಚಿರತೆ ದಾಳಿಗೆ 2 ಹಸು ಬಲಿ

12:38 AM Jan 04, 2024 | Team Udayavani |

ತೆಕ್ಕಟ್ಟೆ: ಮೊಳಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊರನಾಡಿ ಎಂಬಲ್ಲಿ ಚಿರತೆ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿರುವ ಘಟನೆ ಬುಧವಾರ ಸಂಭವಿಸಿದೆ.

Advertisement

ಲಚ್ಚಿ ಕುಲಾಲ್‌ ಮತ್ತು ಗುಲಾಬಿ ಕುಲಾಲ್‌ ಅವರಿಗೆ ಸೇರಿದ ದನಗಳನ್ನು ಮೇಯಲು ಬಿಟ್ಟಿದ್ದು ಕೊಟ್ಟಿಗೆಗೆ ಹಿಂದಿರುಗಿ ಬಾರದ ಕಾರಣ ಹುಡುಕಿಕೊಂಡು ಹೋದಾಗ ಮೃತಪಟ್ಟಿರುವುದು ಕಂಡುಬಂದಿತು.

ಹಸು ಗಳ ಮೇಲೆ ಚಿರತೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮೊಳಹಳ್ಳಿ ಗ್ರಾ.ಪಂ. ಸದಸ್ಯ ಎಂ. ದಿನೇಶ್‌ ಹೆಗ್ಡೆ ಮೊಳಹಳ್ಳಿ, ಮಾಜಿ ಅಧ್ಯಕ್ಷ ಉದಯ ಕುಲಾಲ್‌, ಪಶು ವೈದ್ಯ ಡಾ| ಜಯಣ್ಣ, ಅರಣ್ಯ ಇಲಾಖೆಯ ಸಂತೋಷ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಿರತೆ ಸಂಚಾರ ಹೆಚ್ಚಳ: ಈಗಾಗಲೇ ಗ್ರಾಮೀಣ ಭಾಗದ ಮೊಳಹಳ್ಳಿ, ಯಡಾಡಿ ಮತ್ಯಾಡಿ, ಶಾನಾಡಿ, ಕೊರ್ಗಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹಾಡ ಹಗಲಿನಲ್ಲೇ ಚಿರತೆ ಸಂಚಾರ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next