Advertisement

ಮೊಗವೀರ ವ್ಯವಸ್ಥಾಪಕ ಮಂಡಳಿ ಶಿಕ್ಷಣ ಸಂಕುಲಕ್ಕೆ 2 ಪ್ರಶಸ್ತಿ

04:38 PM Mar 16, 2018 | |

ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಂಬಯಿ ಮಹಾ ನಗರದ ಹಿರಿಯ ಸಾಮಾಜಿಕ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಸಂಚಾಲಿತ ಅಂಧೇರಿ ಶಿಕ್ಷಣ ಸಂಕುಲದಲ್ಲಿರುವ ಹೈಸ್ಕೂಲ್‌ ವಿಭಾಗದ ಶಾರೀರಿಕ ಶಿಕ್ಷಕಿ ಸುಮಂಗಳಾ ಉಚ್ಚಿಲ್‌ ಇವರಿಗೆ ಮಹಾರಾಷ್ಟ್ರ ಸರಕಾರದ ಸ್ಕೌಟ್‌ ಮತ್ತು ಗೈಡ್ಸ್‌ ವತಿಯಿಂದ ಕೊಡಮಾಡುವ ಬಾರ್‌ ಟು ಮೆಡಲ್‌ ಆಫ್‌ ಮೆರಿಟ್‌ ಅವಾರ್ಡ್‌ ಲಭಿಸಿದೆ.

Advertisement

ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾ ಸಾಗರ್‌ ರಾವ್‌ ಅವರ ದಿವ್ಯ ಹಸ್ತದಿಂದ ಪ್ರಶಸ್ತಿ ಯನ್ನು ಇತ್ತೀಚೆಗೆ ಸುಮಂಗಳಾ ಉಚ್ಚಿಲ್‌ ಇವರು ಸ್ವೀಕರಿಸಿದರು. ಕಳೆದ ಮೂವತ್ತು ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಇವರು ಸೇವೆಸಲ್ಲಿಸುತ್ತಿದ್ದು, ಇವರ ಸಿದ್ಧಿ- ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಎಂವಿಎಂ ಶಿಕ್ಷಣ ಸಂಕುಲದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲತಾ ಕರ್ಕೇರ ಇವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶೇಷ ಸಾಧನೆಗಾಗಿ ಪ್ರಸ್ತುತ ವರ್ಷದ ಮುಂಬಯಿ ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆಯ ಪೌರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ಉತ್ತಮ ಶಿಕ್ಷಕಿ ಎಂಬ ಬಿರುದಿನೊಂದಿಗೆ ಪೌರ ಪ್ರಶಸ್ತಿಯನ್ನು ಇತ್ತೀಚೆಗೆ ನೀಡಿ ಗೌರವಿಸಲಾಗಿದೆ. ಕಳೆದ 27 ವರ್ಷಗಳಿಂದ ಲತಾ ಕರ್ಕೇರ ಇವರು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಾಪೌರ ವಿಶ್ವನಾಥ್‌ ಮಹಾದೇಶ್ವರ್‌ ಇವರು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next