Advertisement

1975 ಪ್ರಕರಣ ರಾಜಿಯಲ್ಲಿ ಇತ್ಯರ್ಥ

02:18 PM Dec 15, 2019 | Suhan S |

ಧಾರವಾಡ: ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಈಶಪ್ಪ ಕೆ. ಭೂತೆ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌ ಅನ್ನು ಶನಿವಾರ ನಡೆಸಲಾಯಿತು.

Advertisement

ಧಾರವಾಡದಲ್ಲಿ 14, ಹುಬ್ಬಳ್ಳಿಯಲ್ಲಿ 18, ಕುಂದಗೋಳದಲ್ಲಿ 2 ಪೀಠಗಳನ್ನು, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 1 ಪೀಠ ಸ್ಥಾಪಿಸಿ ಸುಮಾರು 7,009ಕ್ಕಿಂತ ಹೆಚ್ಚು ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ 1,666 ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ 309 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು. ಸುಮಾರು 17 ಕೋಟಿ ಮೊತ್ತವನ್ನು ವಸೂಲು ಮಾಡಲಾಯಿತು. ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿ ಅಧಿಕಾರಿಗಳು, ವಿಮೆ ಕಂಪನಿ ಪ್ಯಾನಲ್‌ ವಕೀಲರುಗಳು, ಅರ್ಜಿದಾರರ ಪರ ವಕೀಲರು, ವಾಕರಸಾಸಂ ಅಧಿಕಾರಿಗಳು, ಕಕ್ಷಿದಾರರು, ಜಿಲ್ಲೆಯ ವಕೀಲ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಹೈಕೋರ್ಟ್‌: ಇಲ್ಲಿಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಲೋಕ ಅದಾಲತ್‌ಗಾಗಿ ಸ್ಥಾಪಿಸಿದ್ದ ಮೂರು ಪೀಠದಲ್ಲಿ ಸುಮಾರು 1,825 ಪ್ರಕರಣಗಳನ್ನು ತೆಗೆದುಕೊಂಡು ಒಟ್ಟು 380 ಮೊಟಾರು ವಾಹನ ಪ್ರಕರಣಗಳನ್ನು ರಾಜಿ ಮಾಡಿಸಲಾಯಿತು. ಒಟ್ಟು ಪರಿಹಾರ 6,58,82,890 ರೂ. ಕೊಡಿಸಲಾಯಿತು. ನ್ಯಾಯಮೂರ್ತಿಗಳಾದ ಎಚ್‌.ಟಿ. ನರೇಂದ್ರ ಪ್ರಸಾದ್‌, ಅಶೋಕ ಜಿ. ನಿಜಗಣ್ಣನವರ್‌, ಪಿ.ಜಿ.ಎಂ. ಪಾಟೀಲ, ಎನ್‌.ಎಸ್‌. ಸಂಜಯಗೌಡ ಮತ್ತು ನಟರಾಜ್‌ ರಂಗಸ್ವಾಮಿ, ರವಿ ಎಸ್‌. ಬಾಳಿಕಾಯಿ, ಜೆ.ಎಸ್‌. ಶೆಟ್ಟಿ, ಎಸ್‌.ಎಸ್‌. ಬಡವಡಗಿ, ಎಂ.ಸಿ. ಹುಕ್ಕೇರಿ, ರಾಘವೇಂದ್ರ ಪುರೋಹಿತ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next