Advertisement

ಆಪರೇಷನ್ ಕಾವೇರಿ: ಸುಡಾನ್‌ನಿಂದ 186 ಮಂದಿ ಭಾರತೀಯರು ಆಗಮನ

12:07 AM May 02, 2023 | Team Udayavani |

ಹೊಸದಿಲ್ಲಿ: ಯುದ್ಧಗ್ರಸ್ಥ ಸೂಡಾನ್‌ನಿಂದ ಭಾರತೀಯರನ್ನು ಪಾರುಮಾಡುವ ಕೇಂದ್ರ ಸರಕಾರದ “ಆಪರೇಶನ್‌ ಕಾವೇರಿ’ ಸೋಮವಾರವೂ ಮುಂದುವರಿದಿದೆ. ಹೊಸತಾಗಿ 186 ಮಂದಿಯನ್ನು ಸುರಕ್ಷಿತವಾಗಿ ಕೊಚ್ಚಿಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗಿc ಟ್ವೀಟ್‌ ಮಾಡಿದ್ದಾರೆ.

Advertisement

ಈವರೆಗೆ ಸುರಕ್ಷಿತವಾಗಿ ತಲುಪಿದ ಭಾರತೀಯರ ಸಂಖ್ಯೆ 2,140ಕ್ಕೆ ಏರಿಕೆಯಾಗಿದೆ. ಇದೇ ವೇಳೆ 17ನೇ ತಂಡದಲ್ಲಿ 135 ಮಂದಿಯ ತಂಡ ಜೆಡ್ಡಾದಿಂದ ಭಾರತದತ್ತ ಪ್ರಯಾಣ ಬೆಳೆಸಿದೆ ಎಂದೂ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ “ಆಪರೇಶ‌ನ್‌ ಕಾವೇರಿ’ಯ ಅನ್ವಯ ಸೌದಿ ಅರೇಬಿಯಾದಿಂದ ಭಾರತೀಯರನ್ನು ಕರೆತರಲು ಹೆಚ್ಚುವರಿಯಾಗಿ ವಿಮಾನಗಳ ಸಂಚಾರ ನಡೆಸಲು ಸ್ಪೈಸ್‌ಜೆಟ್‌ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next