Advertisement

ಸೆಲ್ಫಿ ತೆಗೆಯಲು ರೈಲು ಇಂಜಿನ್ ಏರಿದ ಬಾಲಕ ವಿದ್ಯುತ್ ಶಾಕ್ ಗೆ ಬಲಿ

03:18 PM Apr 08, 2022 | Team Udayavani |

ಛತ್ರಾಪುರ: ರೈಲು ಇಂಜಿನ್ ನ ಮೇಲೆ ಏರಿ ಸೆಲ್ಫಿ ತೆಗೆಯಲು ಹೋದ 16 ವರ್ಷದ ಬಾಲಕನೋರ್ವ ಹೈಟೆನ್ಶನ್ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಛತ್ರಾಪುರದಲ್ಲಿ ನಡೆದಿದೆ. ಗುರುವಾರ ಈ ಘಟನೆ ನಡೆದಿದೆ.

Advertisement

ಮೃತ ಬಾಲಕನನ್ನು 16 ವರ್ಷದ ಸುಹೈಲ್ ಮನ್ಸೂರಿ ಎಂದು ಗುರುತಿಸಲಾಗಿದೆ.  ಈತ ನಿಂತಿದ್ದ ರೈಲಿನ ಇಂಜಿನ್ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದ ಎಂದು ಛತ್ರಾಪುರ ಸ್ಟೇಶನ್ ಮಾಸ್ಟರ್ ಶುಭಾಂಕ್ ಪಟೇಲ್ ಹೇಳಿದ್ದಾರೆ.

“ನಾವು ಬೆಳಗ್ಗೆ ರೈಲ್ವೇ ನಿಲ್ದಾಣಕ್ಕೆ ತೆರಳಿದ್ದೆವು. ಆಗ ಸುಹೈಲ್ ಮನ್ಸೂರಿ ನನ್ನ ಮೊಬೈಲ್ ಕಿತ್ತುಕೊಂಡು ಸೆಲ್ಫಿ ತೆಗೆಯಲು ಹೋದ” ಎಂದು ಸುಹೈಲ್ ಸ್ನೇಹಿತ ಅಶ್ರಫ್ ತಿಳಿಸಿದ್ದಾನೆ.

ಇದನ್ನೂ ಓದಿ:ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಬಾಲಕನು ರೈಲಿನ ಮೇಲಿನ ಹೈಟೆನ್ಶನ್ ತಂತಿಯನ್ನು ಹಿಡಿಯಲು ಹೋದ. ಸೆಲ್ಫಿ ತೆಗೆಯಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಆರ್ ಪಿಎಫ್ ಇನ್ಸ್ ಸ್ಪೆಕ್ಟರ್ ಜಿತೇಂದ್ರ ಕುಮಾರ್ ಹೇಳಿದರು.

Advertisement

ಘಟನೆಯಿಂದ ಕುಪಿತಗೊಂಡ ಕೆಲ ಯುವಕರು ಸ್ಟೇಶನ್ ಮಾಸ್ಟರ್ ಕಚೇರಿಯ ಬಾಗಿಲಿಗೆ ಕಲ್ಲು ತೂರಿ ಹಾನಿ ಮಾಡಿದ್ದಾರೆ. ಅವರು ಸ್ಟೇಶನ್ ಮಾಸ್ಟರ್‌ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವರ ಬ್ಯಾಗ್ ಮತ್ತು ವಾಚ್ ಅನ್ನು ಕಸಿದುಕೊಂಡಿದ್ದಾರೆ ಎಂದು ಆರ್‌ಪಿಎಫ್ ಅಧಿಕಾರಿ ತಿಳಿಸಿದ್ದಾರೆ.

“ ಪೊಲೀಸರು ಸ್ಥಳದಲ್ಲಿ ಶಾಂತಿ ಸ್ಥಾಪನೆ ಮಾಡಿದ್ದಾರೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಆರ್ ಪಿಎಫ್ ಇನ್ಸ್ಪೆಕ್ಟರ್ ಜಿತೇಂದ್ರ ಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next