Advertisement

ಪೊಲೀಸರ ತಪ್ಪಿಗಾಗಿ 16 ವರ್ಷ ಜೈಲಲ್ಲಿ!

12:30 AM Mar 06, 2019 | |

ಹೊಸದಿಲ್ಲಿ: ಕೊಲೆ ಪ್ರಕರಣದಲ್ಲಿ ತಪ್ಪಾಗಿ ದೋಷಿಗಳಾಗಿ, ಮರಣದಂಡನೆಗೆ ಗುರಿಯಾಗಿದ್ದ  6 ಮಂದಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದ್ದು, ಅವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ. ಜತೆಗೆ, ವಿನಾಕಾರಣ ಶಿಕ್ಷೆಯಾಗಿದ್ದಕ್ಕೆ ನ್ಯಾಯಾಲಯ ವಿಷಾದಿಸಿದೆ.

Advertisement

ಈ ಪ್ರಕರಣದಲ್ಲಿ ಬೇಜವಾಬ್ದಾರಿಯುತವಾಗಿ ತನಿಖೆ ನಡೆಸಿದ ಪೊಲೀಸರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ತನಿಖೆಯಲ್ಲಾದ ಲೋಪಕ್ಕೆ ಕಾರಣಕರ್ತರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ರಾಜ್ಯ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ. ಅಂಕುಶ್‌ ಮಾರುತಿ ಶಿಂದೆ ಸೇರಿ 6 ಜನರ ವಿರುದ್ಧ 2003 ಜೂನ್‌ನಲ್ಲಿ ಅತ್ಯಾಚಾರ, ಒಂದೇ ಕುಟುಂಬದ ಐವರನ್ನು ಹತ್ಯೆಗೈದ ಆರೋಪ ಹೊರಿಸಲಾಗಿತ್ತು. 2007ರಲ್ಲಿ ಅವರೆಲ್ಲರನ್ನೂ ದೋಷಿಗಳು ಎಂದು ತೀರ್ಪಿತ್ತು ಬಾಂಬೆ ಹೈಕೋರ್ಟ್‌ ಮರಣ ದಂಡನೆ  ಶಿಕ್ಷೆ ವಿಧಿಸಿತ್ತು. ಅವರೆಲ್ಲರೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕಾರಣ ಮರುವಿಚಾರಣೆ ನಡೆಸಲಾಗಿ, ಅವರು ನಿರ್ದೋಷಿಗಳೆಂದು ಸಾಬೀತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next