Advertisement

ಪುಣೆ ಶ್ರೀ ಗುರುದೇವ ಸೇವಾ ಬಳಗದ 15ನೇ ವಾರ್ಷಿಕೋತ್ಸವ 

12:36 PM Nov 13, 2018 | Team Udayavani |

ಪುಣೆ: ತಾಯ್ನಾಡಿನ ಭಾಷೆ,   ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಹತ್ವವನ್ನು ನೀಡಿ, ಅದರ ಬೆಳವಣಿಗೆಗೆ ಪೂರಕವಾಗಿ ಕಾರ್ಯಗೈದು, ಸಮಾಜದ  ಪ್ರತಿಯೊಬ್ಬ ಬಡ ವ್ಯಕ್ತಿಯು  ಯಾವುದೇ ಅವಕಾಶದಿಂದ ವಂಚಿತನಾಗದೇ   ಸಮಾಜದ ಮುಖ್ಯವಾಹಿನಿಗೆ  ಬರಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು  ಆಧ್ಯಾತ್ಮಿಕ ಚಿಂತನೆಯೊಂದಿಗೆ  ಸಮಾಜ ಮುಖೀ ಸೇವೆಗೈಯುತ್ತಿರುವ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಸ್ಥಾಪನೆಗೊಂಡ ಸಂಸ್ಥೆ   ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರವಾಗಿದೆ ಎಂದು ಪುಣೆ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ   ಹೇಳಿದರು.

Advertisement

ಶ್ರೀ  ಗುರುದೇವ ಸೇವಾ ಬಳಗ ಪುಣೆಯ ಘಟಕವು ಸ್ಥಾಪನೆಗೊಂಡು 15 ವರ್ಷಗಳು ಕಳೆದಿವೆ. ಸ್ವಾಮೀಜಿಯವರ  ಮುಖಾಂತರ, ಸಮಾಜಮುಖೀ ಸೇವಾ ಕಾರ್ಯಗಳು, ಬಡ ಜನರ ಉನ್ನತಿಗೆ ಸಹಕಾರ, ಶಿಕ್ಷಣ, ಆಯು ರ್ವೇದ ಔಷಧೋಪಚಾರ, ಧಾರ್ಮಿಕ, ಕಲಾ ಸೇವೆಗಳು ಇನ್ನಿತರ ಜನೋಪಯೋಗಿ ಸೇವಾ ಕಾರ್ಯಗಳು ನಮ್ಮ ತಾಯ್ನಾಡಿನಲ್ಲಿ ನಿರಂತರ ವಾಗಿ ನಡೆಯುತ್ತಿದೆ. ಈ ಕಾರ್ಯಗಳಿಗೆ  ಪುಣೆಯ  ಬಳಗದ ಮುಖಾಂತರ ಗುರು ಭಕ್ತರು ಹಲವಾರು  ವರ್ಷಗಳಿಂದ ಸಹಕರಿಸುತ್ತಿದ್ದಾರೆ. ಒಡಿಯೂರು ಶ್ರೀಗಳ ಮೂಲಕ ಸಮಾಜ  ಸೇವೆಯನ್ನು ಮನಃಪೂರ್ವಕವಾಗಿ ಮಾಡಿ ಕೊಂಡು ಬಂದಿದ್ದೇವೆ. ಈ ರೀತಿಯ ಸೇವೆ ಯಿಂದ ತೃಪ್ತಿಯನ್ನು ಪಡೆದಿದ್ದೇವೆ.  ಇದು ಪ್ರತಿಷ್ಠೆಯ ಮಾತಲ್ಲ, ಸ್ವಾಮೀಜಿಯವರಿಗೆ ಸಮಾಜದ ಬಗ್ಗೆ ಇರುವ ತುಡಿತವನ್ನು ಶ್ರೀಕ್ಷೇತ್ರ ದಲ್ಲಿ ಕಾಣಬಹುದು. ಇಂತಹ ಕಾರ್ಯಗಳಲ್ಲಿ ಇನ್ನಷ್ಟು ಬಂಧುಗಳು ಪಾಲುದಾರರಾಗಬೇಕು. ಪುಣೆಯ ಎಲ್ಲ ತುಳು ಕನ್ನಡಿಗರ ಸಹಕಾರ ಇಂಥ ಕಾರ್ಯಗಳಿಗೆ ಸಿಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.

ಪುಣೆ ಶ್ರೀ ಗುರುದೇವಾ ಸೇವಾ ಬಳಗದ ವಾರ್ಷಿಕೊತ್ಸವವು ನ. 22ರಂದು ಪುಣೆಯ ತಿಲಕ್‌ ಸ್ಮಾರಕ ರಂಗ ಮಂದಿರದಲ್ಲಿ  ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದರ  ಪೂರ್ವ ತಯಾರಿ ಸಭೆಯು ನ. 8ರಂದು  ಶಿವಾಜಿನಗರದ ಕೃಷ್ಣ ಪ್ರಸಿಡೆನ್ಸಿ ಹೊಟೇಲ್‌ ಕಿರು ಸಭಾ ಭವನದಲ್ಲಿ  ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ಪ್ರತಿ ವರ್ಷವೂ ಪೂಜ್ಯ ಶ್ರೀ ಗುರುವರ್ಯರು, ಸಾಧ್ವಿ ಮಾತಾನಂದಮಯಿ ಯವರು   ಪುಣೆ  ಬಳಗದ ವಾರ್ಷಿಕೋತ್ಸವ ಸಂದರ್ಭ ಪುಣೆಗೆ ಭೇಟಿ ನೀಡಿ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಸಮಾಜಕ್ಕೆ ಬೇಕಾಗುವ ಉತ್ತಮ  ಸಂದೇಶದೊಂದಿಗೆ ಆಶೀರ್ವಚನ ನೀಡಿ ಹರಸಿ¨ªಾರೆ. ಅಂತೆಯೇ ನಮ್ಮ ಈ ವರ್ಷದ ವಾರ್ಷಿಕೋತ್ಸವವು ನ. 22ರಂದು ನಡೆಯಲಿದ್ದು, ಪೂಜ್ಯ ಸ್ವಾಮೀಜಿಯವರು ಅಗಮಿಸಲ್ಲಿ¨ªಾರೆ.  ಕಾರ್ಯಕ್ರಮಕ್ಕೆ ಪುಣೆಯ  ಎಲ್ಲ ಭಕ್ತ ಜನರು ಆಗ ಮಿಸಿ  ಯಶಸ್ವಿಗೊಳಿಸಬೇಕು ಎಂದರು. 

ಅಧ್ಯಕ್ಷರು, ಪದಾಧಿಕಾರಿಗಳು ದೇವರಿಗೆ ಆರತಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ವಜ್ರಮಾತಾ ಮಹಿಳಾ ವಿಕಾಸ  ಕೇಂದ್ರದ ಅಧ್ಯಕ್ಷೆ  ಪ್ರೇಮಾ ಎಸ್‌. ಶೆಟ್ಟಿ, ಬಳಗದ ಕಾರ್ಯದರ್ಶಿ ಎನ್‌. ರೋಹಿತ್‌ ಶೆಟ್ಟಿ ನಗ್ರಿಗುತ್ತು ಉಪಸ್ಥಿತರಿದ್ದರು. 

Advertisement

ಬಳಗದ  ಗೌರವ ಕಾರ್ಯದರ್ಶಿ ಎನ್‌. ರೋಹಿತ್‌ ಶೆಟ್ಟಿ ಅವರು ಸ್ವಾಗತಿಸಿ ಬಳಗದ 15ನೇ ವಾರ್ಷಿಕೋತ್ಸವದ ತಯಾರಿಯ ಬಗ್ಗೆ ಹಾಗು ಕಾರ್ಯಕ್ರಮದ ರೂಪುರೇಷೆಗಳು ಮತ್ತು ಸದಸ್ಯರು  ನಿರ್ವಹಿಸಲಿರುವ  ಜವಾಬ್ದಾರಿಗಳ ಬಗ್ಗೆ ಸಭೆಗೆ ತಿಳಿಸಿ, ಪುಣೆಯಲ್ಲಿ  ಸ್ವಾಮೀಜಿಯವರ  ನಾಲ್ಕು ದಿನಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಬಯಸಿದರು.

ಬಳಗದ  ಪ್ರಮುಖರಾದ  ಸಲಹೆಗಾರ ಉಷಾ ಕುಮಾರ್‌ ಶೆಟ್ಟಿ ಅವರು ಕಾರ್ಯಕ್ರಮದ ಖರ್ಚು ವಿವರವನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ  ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. 
ಬಳಗದ ಪ್ರಮುಖರಾದ  ಕೋಶಾಧಿಕಾರಿ ರಂಜಿತ್‌ ಶೆಟ್ಟಿ, ಉಮೇಶ್‌ ಶೆಟ್ಟಿ ಸ್ಲಿàಪ್‌ ವೆಲ್‌, ಸುಧಾಕರ ಶೆಟ್ಟಿ, ನಾಗರಾಜ್‌ ಶೆಟ್ಟಿ ಹಡಪ್ಸರ್‌, ಪ್ರಮೋದ್‌ ರಾವುತ್‌, ವಿಠuಲ್‌ ಶೆಟ್ಟಿ,  ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಜಯಲಕ್ಷಿ¾à ಪಿ. ಶೆಟ್ಟಿ,  ಶೋಭಾ ಯು. ಶೆಟ್ಟಿ, ಪುಷ್ಪಾ ಎಲ್‌. ಪೂಜಾರಿ, ವೀಣಾ ಪಿ. ಶೆಟ್ಟಿ, ವೀಣಾ ಡಿ. ಶೆಟ್ಟಿ, ಸುಮನಾ ಎಸ್‌. ಹೆಗ್ಡೆ, ಸಂಧ್ಯಾ ಶೆಟ್ಟಿ, ರಜನಿ  ಹೆಗ್ಡೆ,  ಶ್ವೇತಾ ಎಚ್‌. ಮೂಡಬಿದಿರೆ ಹಾಗೂ ಇತರೆ ಸದಸ್ಯರು  ತಮ್ಮ  ಸಲಹೆಗಳನ್ನು ನೀಡಿದರು. ರೋಹಿತ್‌ ಶೆಟ್ಟಿ ವಂದಿಸಿದರು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next