Advertisement

ತೊಗರಿ ಖರೀದಿಗೆ 156 ಕೇಂದ್ರ ಸ್ಥಾಪನೆ: ಜ್ಯೋತ್ಸ್ನಾ

04:55 PM Dec 19, 2020 | Suhan S |

ಕಲಬುರಗಿ: ಈ ಸಲ ತೊಗರಿ ಮಾರುಕಟ್ಟೆಗೆ ಬರುವ ಮೊದಲೆ ಬೆಂಬಲ ಬೆಲೆಯಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು,ಉತ್ತಮ ಬೆಳವಣಿಗೆಯಾಗಿದೆ. ಆದರೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನನಿಗದಿ ಮಾಡದಿರುವುದು ನಿರಾಸೆ ಮೂಡಿಸಿದೆ.

Advertisement

ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿತೊಗರಿ ಕಾಳು ಪ್ರತಿ ಕ್ವಿಂಟಲ್‌ಗೆ 6000ರೂ.ದರದಲ್ಲಿ ಜಿಲ್ಲೆಯ ರೈತರಿಂದ ಖರೀದಿಸಲುಒಟ್ಟು 156 ಖರೀದಿ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ತೊಗರಿ ಬೆಳೆದ ರೈತರುಅವಶ್ಯಕ ದಾಖಲಾತಿಗಳೊಂದಿಗೆ ತಮ್ಹತ್ತಿರದ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ತೆರಳಿ ಆನ್‌ಲೈನ್‌ ಮೂಲಕ ಹೆಸರುನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್‌ ಸಮಿತಿ ಅಧ್ಯಕ್ಷರಾದ ವಿ.ವಿ. ಜ್ಯೋತ್ಸ್ನಾ ಮನವಿ ಮಾಡಿದ್ದಾರೆ.

ಪ್ರತಿ ಎಕರೆಗೆ 7.5 ಕ್ವಿಂಟಲ್‌ ಗರಿಷ್ಠ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್‌ತೊಗರಿ ಉತ್ಪನ್ನ ಮಾತ್ರ ಖರೀದಿಸಲಾಗುತ್ತದೆ.ತೊಗರಿ ಬೆಳೆದ ರೈತರು ಹತ್ತಿರದ ಯಾವುದೇತೊಗರಿ ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ತೆರಳಿ ಆನ್‌ಲೈನ್‌ನಲ್ಲಿ2020ರ ಡಿಸೆಂಬರ್‌ 30 ರೊಳಗಾಗಿ ಹೆಸರುನೋಂದಾಯಿಸಿಕೊಳ್ಳಬೇಕು. ರೈತರಿಂದತೊಗರಿ ಕಾಳು ಖರೀದಿಯ ಕಾಲಾವಧಿಯನ್ನು2021ರ ಜನವರಿ 1ರಿಂದ 30ರ ವರೆಗೆ ನಿಗದಿಪಡಿಸಲಾಗಿದೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟಮಹಾ ಮಂಡಳ ನಿಯಮಿತ 113 ಖರೀದಿ ಕೇಂದ್ರ, ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ 43ಸೇರಿದಂತೆ ಒಟ್ಟು 153 ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕಲಬುರಗಿ ತಾಲೂಕು: ಭೀಮಳ್ಳಿ, ಬೇಲೂರ (ಕೆ), ಅವರಾದ (ಬಿ), ಹಾಗರಗಾ, ಫಿರೋಜಾಬಾದ್‌, ಹರಸೂರ, ಕುಮಸಿ, ಡೊಂಗೂರಗಾಂವ್‌, ಸಾವಳಗಿ (ಬಿ), ಕವಲಗಾ(ಬಿ), ಶರಣಸಿರಸಗಿ (ಹಡಗಿಲ್‌ ಹಾರುತಿ),ಹೊನಕಿರಣಗಿ, ಜಂಬಗಾ, ಪಟ್ಟಣ, ನಾಗೂರ, ಕಲಮೊಡ, ಭೂಪಾಲ ತೇಗನೂರ ಕರ್ನಾಟಕರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾಗಿವೆ. ಮಹಾಗಾಂವ್‌, ಹಾಗರಗುಂಡಗಿ, ಮಿಣಜಗಿ,ಸಣ್ಣೂರ, ಓಕಳಿ, ಮೇಳಕುಂದಾ (ಬಿ)ಯ ನೇಗಿಲಯೋಗಿ ರೈತ ಸಂಘ, ಕಮಲಾಪುರದಗ್ರಾಮೀಣ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ಕಮಲಾಪುರದ ದೇವರ ದಾಸಿಮಯ್ನಾ ರೈತ ಉತ್ಪಾದಕರ ಕಂಪನಿ, ಶ್ರೀನಿವಾಸ ಸರಡಗಿ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಖರೀದಿ ಕೇಂದ್ರಗಳಾಗಿವೆ.

Advertisement

ಸೇಡಂ ತಾಲೂಕು: ಕಾನಾಗಡ್ಡಾ, ಕೋಳಕುಂದಾ,ಸಿಂಧನಮಡು, ಕುರಕುಂಟಾ, ನಾಡೆಪಲ್ಲಿ, ಮೇದಕ್‌, ಹಾಬಾಳ (ಟಿ), ರಂಜೋಳ,ಹೊಡೆಬೀರನಹಳ್ಳಿ, ಕೊಳಕುಂದಾ ಗ್ರಾಮೀಣ(ದುಗನೂರ) ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದಖರೀದಿ ಕೇಂದ್ರಗಳಾಗಿವೆ. ಚಂದಾಪುರ,ಅಡಕಿ, ಮುಧೋಳ, ಕೋಡ್ಲಾ, ಸೂರವಾರ,ಕಾಗಿಣಾ ರೈತ ಉತ್ಪಾದಕರ ಸಂಸ್ಥೆ ಕಲಬುರಗಿಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿಮಂಡಳಿ ಖರೀದಿ ಕೇಂದ್ರಗಳಾಗಿವೆ.

ಅಫಜಲಪುರ ತಾಲೂಕು: ಮಣ್ಣೂರ, ಮಾಶಾಳ್‌, ಅತನೂರ್‌, ಕಲ್ಲೂರ್‌ (ಡಿ), ದೇವಲಗಾಣಗಾಪುರ, ಭೈರಾಮಡಗಿ, ಬಂದರವಾಡ್‌, ಗಬ್ಬೂರ್‌ (ಬಿ), ಮಲ್ಲಾಬಾದ, ಬೋಸಗಾ, ಗೌರ(ಬಿ), ಬಳ್ಳುರಗಿ, ರೇವೂರ ಕರ್ನಾಟಕ ರಾಜ್ಯ ಸಹಕಾರ ಮಾರಾಟಮಹಾಮಂಡಳ ನಿಯಮಿತದ ಖರೀದಿಕೇಂದ್ರಗಳಾಗಿವೆ. ಕರಜಗಿ, ಚಿಣಮಗೇರಾ,ಹಸರಗುಂಡಗಿ, ಸ್ಟೇಶನ್‌ ಗಾಣಗಾಪುರದ ಸಂಗಮನಾಥ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಖರೀದಿ ಕೇಂದ್ರಗಳಾಗಿವೆ.

ಆಳಂದ ತಾಲೂಕು: ಕಡಗಂಚಿ, ನಿಂಬಾಳ, ಮುನ್ನಳಿ, ಕಮಲಾನಗರ, ಖಜೂರಿ, ಯಳಸಂಗಿ, ಅಂಬಲಗಾ, ರುದ್ರವಾಡಿ,ಸನಗುಂದ (ಬೆಳಮಗಿ), ಜಂಬಗಾ (ಜೆ), ಮಾದನಹಿಪ್ಪರಗಾ, ಪಡಸಾವಳಗಿ, ಆಳಂದ ಪ್ಯಾಕ್ಸ್‌, ಸಂಗೋಳಗಿ (ಬಿ), ಹಿರೊಳ್ಳಿ,ಹೋದಲೂರ, ವಿ.ಕೆ. ಸಲಗರ, ನರೋಣ,ಏಲೆನಾವದಗಿ, ಕೊಡಲಹಂಗರಗಾ, ಚಿಂಚನಸೂರ (ಕೆರೆಅಂಬಲಗಾ), ನಿರಗುಡಿ,ಭೂಸನೂರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದಖರೀದಿ ಕೇಂದ್ರಗಳಾಗಿವೆ. ನಿಂಬರ್ಗಾ,ಸರಸಂಬಾ, ತಡಕಲ್‌, ಕವಲಗಾ ಹಾಗೂ ಮೋಘಾ (ಕೆ) ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಖರೀದಿ ಕೇಂದ್ರಗಳಾಗಿವೆ.

ಚಿಂಚೋಳಿ ತಾಲೂಕು: ನಿಡಗುಂದಾ, ಸುಲೇಪೇಟ್‌, ಕನಕಪುರ, ಶಾದಿಪುರ, ಸಾಲೆಬೀರನಳ್ಳಿ, ಚಂದನಕೇರಾ, ಪೋಲಕಪಳ್ಳಿ,ಕೋಡ್ಲಿ, ಚೇಂಗಟಾ, ಚಿಂತಪಲ್ಲಿ, ಗರಗಪಳ್ಳಿ,ಮಿರಿಯಾಣ, ರಟಕಲ್‌, ರುದ್ದೂರ, ಕೆರಳ್ಳಿ,ಗಡಿನಿಂಗದಳ್ಳಿ ಕರ್ನಾಟಕ ರಾಜ್ಯ ಸಹಕಾರ

ಮಾರಾಟ ಮಹಾಮಂಡಳ ನಿಯಮಿತಖರೀದಿ ಕೇಂದ್ರಗಳಾಗಿವೆ. ಐನೋಳಿ, ಐನಾಪುರ, ಹಸರಗುಂಡಗಿ, ಚಿಮ್ಮನಚೂಡ, ಮೋಘಾ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಖರೀದಿ ಕೇಂದ್ರಗಳಾಗಿವೆ.

ಚಿತ್ತಾಪುರ ತಾಲೂಕು: ಕೊಳ್ಳೂರ,ಭೀಮನಳ್ಳಿ, ರಾವೂರ್‌, ಗುಂಡಗುರ್ತಿ,ದಂಡೋತಿ, ಮರತೂರ್‌, ಟೆಂಗಳಿ,ಬಂಕೂರ, ಪೇಟಶಿರೂರ್‌, ಕಮರವಾಡಿ,ಕುಂದನೂರ್‌, ಬಾಗೋಡಿ, ಹಲಚೇರಾ,ಕೊಡದೂರ, ಗೊಟುರ್‌, ಆಲೂರ (ಬಿ),ಹೆಬ್ಟಾಳ್‌, ಕುಂದಗೋಳ ಕರ್ನಾಟಕ ರಾಜ್ಯಸಹಕಾರ ಮಾರಾಟ ಮಹಾಮಂಡಳನಿಯಮಿತದ ಖರೀದಿ ಕೇಂದ್ರಗಳಾಗಿವೆ. ಹೆರೂರ, ಮಂಗಲಗಿ, ಅರಣಕಲ್‌, ಕಾಳಗಿ,ಹಳಕಟ್ಟ, ನಾಲವಾರ, ಚಿತ್ತಾಪುರ ತಾಲೂಕಿಚಿಂಚೋಳಿ ಕಾಯಕ ರೈತ ಉತ್ಪಾದಕರ ಸಂಸ್ಥೆ, ಡೋಣಗಾಂವ್‌, ಕರದಾಳ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾಗಿವೆ.

ಜೇವರ್ಗಿ ತಾಲೂಕು: ಮಳ್ಳಿ, ಬಳಬಟ್ಟಿ, ಕಲ್ಲೂರ್‌ (ಕೆ), ಮಂದೇವಾಲ್‌, ಗುಡೂರ್‌ ಎಸ್‌.ಎ., ಸುಂಬಡ್‌, ಕೋಳಕೋರ್‌ (ಜೇವರ್ಗಿ), ಅಂಕಲಗಾ, ಹರನೂರ್‌,ಇಜೇರಿ (ಯಳವಾರ), ಆಲೂರು, ಗಂವ್ಹಾರ, ಹರವಾಳ, ಕುಕನೂರ, ನರಿಬೊಳಿ, ಯಡ್ರಾಮಿ,ಬೀಳವಾರ ಕರ್ನಾಟಕ ರಾಜ್ಯ ಸಹಕಾರಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾಗಿವೆ. ಅರಳಗುಂಡಗಿ,ಆಂದೋಲಾ, ಜೇರಟಗಿ, ಕೆಲ್ಲೂರ,ಕುರಳಗೇರಾ, ಕುಮ್ಮನ ಸಿರಸಗಿ ಕಲಬುರಗಿಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾಗಿವೆ.

ಕ್ವಿಂಟಲ್‌ಗೆ 7500ರೂ. ನಿಗದಿಗೆ ಆಗ್ರಹ :

ಪ್ರಸಕ್ತವಾಗಿ ಅತಿವೃಷ್ಟಿಯಿಂದ ಶೇ. 50 ತೊಗರಿ ಬೆಳೆ ಹಾಳಾಗಿದ್ದರಿಂದ ತೊಗರಿಯನ್ನು ಕನಿಷ್ಠ 7500ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದಲ್ಲಿ ಮಾತ್ರ ನ್ಯಾಯ ದೊರಕಲುಸಾಧ್ಯ ಎಂದು ರೈತರು ಆಗ್ರಹಿಸಿದ್ದಾರೆ. ಕಳೆದ ವರ್ಷ ಕೇಂದ್ರದ ಬೆಂಬಲ ಬೆಲೆ, ರಾಜ್ಯದ ಪ್ರೋತ್ಸಾಹ ಧನ ಸೇರಿ 6100 ರೂ. ಕ್ವಿಂಟಾಲ್‌ಗೆ ಖರೀದಿ ಮಾಡಲಾಗಿತ್ತು. ಈ ವರ್ಷ 100ರೂ. ಕಡಿಮೆ ಆಗಿರುವುದರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next