Advertisement

15 ಕಾಂಗ್ರೆಸ್‌ ಹೆಸರು ಅಂತಿಮ; ಸ್ಕ್ರೀನಿಂಗ್‌ ಸಮಿತಿ ಸಭೆ ಬಳಿಕ ದಿಲ್ಲಿಗೆ 2ನೇ ಪಟ್ಟಿ

01:10 AM Mar 12, 2024 | Team Udayavani |

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯದ ಉಳಿದ 21 ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ತನ್ನ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದ ಕಾಂಗ್ರೆಸ್‌ ನಾಯಕರು, 2ನೇ ಹಂತದ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ. ಇದರೊಂದಿಗೆ ಅಭ್ಯರ್ಥಿಗಳ ಪಟ್ಟಿ ಈಗ ದಿಲ್ಲಿಯ ಅಂಗಳ ತಲುಪಿದೆ. ಮಂಗಳವಾರ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

Advertisement

ರಾಜ್ಯ ಉಸ್ತುವಾರಿ ಸುಜೇìವಾಲ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಸಮ್ಮುಖ ಸಂಜೆ ಆರಂಭವಾದ ಚುನಾ ವಣ ಸಮಿತಿ ಸಭೆ ತಡರಾತ್ರಿವರೆಗೂ ನಡೆಯಿತು. 10-15 ಕ್ಷೇತ್ರಗಳಿಗೆ ಹೆಸರು
ಗಳನ್ನು ಶಿಫಾರಸು ಮಾಡಲು ತೀರ್ಮಾ ನಿಸಲಾಗಿದೆ. ಗೊಂದಲಗಳ ನಿವಾರಣೆ, ಕೆಲವು ಆಂತರಿಕ ಪೈಪೋಟಿಗಳಿಂದ ಕಗ್ಗಂಟಾಗಿದ್ದ ಹಲವು ಕ್ಷೇತ್ರಗಳಿಗೆ ನಾಯಕರ ಮನವೊಲಿಕೆಯೊಂದಿಗೆ ಆಯಾ ಕ್ಷೇತ್ರಗಳಿಗೆ ಒಂದು ಹೆಸರನ್ನು ಅಂತಿಮಗೊಳಿಸಲು ಸಾಧ್ಯವಾಗಿದೆ.ಈ ಸಂಬಂಧದ ಪಟ್ಟಿ ಕೂಡ ಈಗಾಗಲೇ ಹೈಕಮಾಂಡ್‌ ತಲುಪಿದೆ ಎನ್ನಲಾಗಿದೆ.

ಉಡುಪಿ-ಚಿಕ್ಕಮಗಳೂರು, ಬೆಳಗಾವಿ, ಚಿಕ್ಕೋಡಿ, ಚಿಕ್ಕಬಳ್ಳಾಪುರ, ರಾಯಚೂರು, ಬಾಗಲಕೋಟೆ ಸಹಿತ ಹಲವನ್ನು ಬಾಕಿ ಉಳಿಸಿಕೊಂಡಿದ್ದು, 3ನೇ ಹಂತದಲ್ಲಿ ಇದಕ್ಕೆ “ಬಿಡುಗಡೆ ಭಾಗ್ಯ’ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧದ ಪಟ್ಟಿ ಕೂಡ ಈಗಾಗಲೇ ಹೈಕಮಾಂಡ್‌ ತಲುಪಿದೆ ಎನ್ನಲಾಗಿದೆ.ಕೆಪಿಸಿಸಿ ಕಚೇರಿಯಲ್ಲಿ ನಡೆದ ಮ್ಯಾರಥಾನ್‌ ಸಭೆಯಲ್ಲಿ ಸುಮಾರು 10 15 ಕ್ಷೇತ್ರಗಳಿಗೆ ಹೆಸರುಗಳನ್ನು ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಬಹುತೇಕ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ, ಚಿತ್ರದುರ್ಗ, ಹುಬ್ಬಳ್ಳಿ ಧಾರವಾಡ, ಬಳ್ಳಾರಿ, ಉತ್ತರ ಕನ್ನಡ, ಮಂಗಳೂರು, ಬಳ್ಳಾರಿ, ಬೀದರ್‌, ಕಲಬುರಗಿ, ಕೊಪ್ಪಳ ಕ್ಷೇತ್ರಗಳಲ್ಲಿ ಹೆಸರು ಅಂತಿಮಗೊಳಿಸಲಾಗಿದೆ. ಉಡುಪಿ ಚಿಕ್ಕಮಗಳೂರು, ಬೆಳಗಾವಿ, ಚಿಕ್ಕೋಡಿ, ಚಿಕ್ಕಬಳ್ಳಾಪುರ, ರಾಯಚೂರು, ಬಾಗಲಕೋಟೆ ಸಹಿತ ಹಲವನ್ನು ಬಾಕಿ ಉಳಿಸಿಕೊಂಡಿದ್ದು, 3ನೇ ಹಂತದಲ್ಲಿ ಇದಕ್ಕೆ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ದಿಲ್ಲಿಯಲ್ಲಿ ಈ ಕಸರತ್ತು ನಡೆಯುತ್ತಿತ್ತು. ಈ ಬಾರಿ ಬೆಂಗಳೂರಿನಲ್ಲೇ ನಡೆದಿದೆ. ಮೊದಲೇ ನಿಗದಿಯಾದಂತೆ ಬೆಳಗ್ಗೆಯಿಂದ ಸಂಜೆಯ ವರೆಗೆ ಚುನಾವಣ ಸಮಿತಿ ಸಭೆ ನಡೆಸಿ, ಪಟ್ಟಿಯನ್ನು ದಿಲ್ಲಿಯಲ್ಲಿ ಸೋಮವಾರ ಸಂಜೆ ನಡೆಯಲಿದ್ದ ಸಭೆಗೆ ಕಳುಹಿಸಿಕೊಡಬೇಕಿತ್ತು. ಆದರೆ ಕೆಪಿಸಿಸಿ ಕಚೇರಿಯಲ್ಲೇ ತಡವಾಗಿ ಅಂದರೆ ಸಂಜೆ ಸಭೆ ಆರಂಭವಾಯಿತು. ಅದೇ ರೀತಿ ದಿಲ್ಲಿ ಸಭೆ ಕೂಡ ವಿಳಂಬವಾಯಿತು.

Advertisement

ಈ ಮಧ್ಯೆ ಮೂರ್‍ನಾಲ್ಕು ತಾಸು ನಡೆದ ಸಭೆಯಲ್ಲಿ ಮೀಸಲು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ
ಗೊಳಿಸುವುದು, ಉಡುಪಿ ಚಿಕ್ಕಮಗಳೂರಿಗೆ ಜಯಪ್ರಕಾಶ್‌ ಹೆಗ್ಡೆ ಮನವೊಲಿಕೆ, ಬೆಳಗಾವಿ ಮತ್ತು ಚಿಕ್ಕೋಡಿ ವಿಚಾರದಲ್ಲಿನ ನಾಯಕರ ಪ್ರತಿಷ್ಠೆ ಸಹಿತ ಹಲವು ವಿಷಯಗಳು ಚರ್ಚೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಪೈಪೋಟಿ ಚರ್ಚೆ
ಚಿಕ್ಕೋಡಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲು ಸ್ಕ್ರೀನಿಂಗ್‌ ಕಮಿಟಿಯು ಸಚಿವ ಸತೀಶ ಜಾರಕಿಹೊಳಿ ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿತು ಎನ್ನಲಾಗಿದೆ. ಕರೆಯ ಮೇರೆಗೆ ಸಚಿವ ಜಾರಕಿಹೊಳಿ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿ, ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಚಿಕ್ಕೋಡಿಗೆ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರ ಹೆಸರನ್ನು ಕಮಿಟಿಯು ಸಚಿವರ ಮುಂದಿಟ್ಟಿದೆ. ಆದರೆ ಇದಕ್ಕೆ ಸಚಿವರು ಅಷ್ಟಾಗಿ ಸಹಮತ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಯಾವುದು ಅಂತಿಮ?
ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಚಿತ್ರ ದುರ್ಗ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಉತ್ತರ ಕನ್ನಡ, ಮಂಗಳೂರು, ಬಳ್ಳಾರಿ, ಬೀದರ್‌, ಕಲಬುರಗಿ, ಕೊಪ್ಪಳ ಕ್ಷೇತ್ರಗಳು

Advertisement

Udayavani is now on Telegram. Click here to join our channel and stay updated with the latest news.

Next