Advertisement

ಬಿಜೆಪಿಗೆ 130 ಸ್ಥಾನ; ನನಗೆ ಸಿಎಂ ಹುಚ್ಚುತನ ಇಲ್ಲ: ಯತ್ನಾಳ್

10:42 PM May 10, 2023 | Vishnudas Patil |

ವಿಜಯಪುರ: ರಾಜ್ಯದಲ್ಲಿ ಬಿಜೆಪಿ 130 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ. ಆದರೆ ನನಗೆ ಮುಖ್ಯಮಂತ್ರಿ ಆಗುವ ಹುಚ್ಚು ಯೋಚನೆ ಇಲ್ಲ. ಯೋಗವಿದ್ದರೆ ಯಾರೂ ತಪ್ಪಿಸಲಾಗದು ಎಂದು ಶಾಸಕ, ವಿಜಯಪುರ ನಗರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯಿಸಿದರು.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನನಗೆ ಮಂತ್ರಿ ಆಗುವ ಅಸೆಯೇ ಇಲ್ಲ, ನಾನು ಎಲ್ಲೂ ಮುಖ್ಯಮಂತ್ರಿ ಆಗುವ ಮಾತನಾಡಿಲ್ಲ. ಬಹುಮತ ಪಡೆದ ಬಳಿಕ ಈ ಬಗ್ಗೆ ಪಕ್ಷ ನಿರ್ಧರಿಸಲಿದೆ ಎಂದರು.

ನಗರದಲ್ಲಿ ಪಾಲಿಕೆ ಸದಸ್ಯೆಯ ಪತಿ ಹತ್ಯೆಯಲ್ಲಿ ಕಾಂಗ್ರೆಸ್ ಪಕ್ಷದವರ ಕೈವಾಡ ಇರುವುದು ಬಹಿರಂಗ ಆಗಿದೆ. ಹೀಗಾಗಿ ನಗರದ ಜನರು ಅಭಿವೃದ್ಧಿ, ಶಾಂತಿ ಬಯಸಿದ್ದಾರೆ. ಕಾರಣ ಸ್ವಯಂ ಪ್ರೇರಿರತರಾಗಿ ನಗರದ ಜನರೇ ಒಗ್ಗೂಡಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಿ, ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next