Advertisement

ಪಂಡಿತೋತ್ತಮರಿಂದ ಕನ್ನಡ ಸಾಹಿತ್ಯ ಶ್ರೀಮಂತ

12:43 PM Mar 01, 2021 | Team Udayavani |

ಕನಕಪುರ: ಪಂಡಿತೋತ್ತಮರು. ತಾಯಿ ವಾಗ್ದೇವಿಯ ಆರಾಧಕರು. ಗುಣಾತ್ಮಕ ಸಾಹಿತ್ಯ ಸೃಷ್ಟಿಕರ್ತರು. ಪ್ರತಿಭಾ ಸಂಪನ್ನರು. ನಾಡಿನಲ್ಲಿ ಜನಿಸಿ ಕನ್ನಡಸಾಹಿತ್ಯ ವನ್ನು ಶ್ರೀಮಂತಗೊಳಿಸಿದ್ದಾರೆ ಎಂದುತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಲ್‌. ನರಸಿಂಹಯ್ಯ ತಿಳಿಸಿದರು.

Advertisement

ನಗರದ ರೋಟರಿ ಭವನದಲ್ಲಿ ತಾಲೂಕು ಕನ್ನಡಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ 10ನೇಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾನವ ಕುಲಂ ತಾನೊಂದೆ ವಲಂ ಎಂದು ಹತ್ತನೇಶತಮಾನದಲ್ಲಿಯೇ ಏಕತೆಯನ್ನು ಸಾರಿದ ಆದಿಕವಿ ಪಂಪನಿಂದ ಪ್ರಾರಂಭವಾದ ಕನ್ನಡ ಭಾಷಾ ಸಾಹಿತ್ಯ ವಾಹಿನಿ. ಒಂಭತ್ತು ಶತಮಾನಗಳ ಅವಧಿಯಲ್ಲಿ ಜೈನ ಯುಗ. ಶೈವಯುಗ ಮತ್ತು ವೈಷ್ಣವ ಯುಗವನ್ನು ಕಾಣಿಸಿದೆ ಎಂಬುದು ಗಮನಾರ್ಹ ಬೆಳವಣಿಗೆ ಎಂದರು.

ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ: ರನ್ನನ ಭಾಷಾ ಸಾಮರ್ಥ್ಯಕ್ಕೆ, ಕಾವ್ಯದ ಸೊಗಸಿಗೆ ವಶವಾಗದಿರಲು ಸಾಧ್ಯವೇ. ಕನ್ನಡ ಸಾಹಿತ್ಯ ಶ್ರೀಮಂತವಾಗಿ ಅಖೀಲ ಭಾರತ ಮಟ್ಟದಲ್ಲಿ ಬೇರೆ ಯಾವ ಭಾಷೆಗೂ ಕಡಿಮೆಇಲ್ಲದಷ್ಟು 8 ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿರುವ ಹೆಗ್ಗಳಿಕೆ ನಮ್ಮ ಕನ್ನಡ ಸಾಹಿತ್ಯಕ್ಕೆ, ಸಾಹಿತಿಗಳಿಗೆ ಇದೆಎಂದು ಪ್ರತಿಪಾದಿಸಿದರು.

ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ಸಮಷ್ಟಿಯ ಹಿತ ಸುಖಗಳ ಬಗೆಗೆ ಪ್ರಯತ್ನಗಳು ನಡೆಯಬೇಕಾಗಿದೆ. ತತ್ಸಂಬಂಧವಾದ ವಿಚಾರಧಾರೆ ಯನ್ನು ಗಾಂಧೀಜಿ ಮತ್ತು ಅವರ ಶಿಷ್ಯ ಸಂತ ವಿನೋಬಾಭಾವೆ ಅವರು ಹರಿಸಿದ್ದಾರೆ. ಆ ಗುರು- ಶಿಷ್ಯರ ವಿಚಾರಧಾರೆಯೊಂದಿಗೆ ಆಗಿ ಹೋಗಿರುವ ಸುಧಾರಕರು, ಚಿಂತಕರುಧರ್ಮಚಾರ್ಯರು ಮತ್ತು ಮಾನವತಾವಾದಿಗಳು ಪ್ರತಿಪಾದಿಸಿರುವ ಮೌಲ್ಯಗಳನ್ನು ನಮೀಕರಿಸಿಸರ್ವೋದಯ ಸಾಹಿತ್ಯ ಪ್ರಕಾರವನ್ನು ಬೆಳೆಸುವುದು ಕಾಲೋಚಿತವಾಗಿ ಕಂಡು ಬರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಬೆಸಗರಹಳ್ಳಿ ಎಲ್ಲೇಗೌಡ ಮಾತನಾಡಿ, ಸಮ್ಮೇಳನ ಅಧ್ಯಕ್ಷರಾದ ಎಲ್‌. ನರಸಿಂಹಯ್ಯ ಅವರು ಮುಖ್ಯೋಪಾಧ್ಯಾಯರಾಗಿ ಮಕ್ಕಳಿಗೆ ಚರ್ಚಾ ಸ್ಪರ್ಧೆ ಮತ್ತು ಭಾವಗೀತೆ ಸ್ಪರ್ಧೆಗಳನ್ನುಏರ್ಪಡಿಸುವುದರ ಮೂಲಕ ಮಕ್ಕಳಲ್ಲಿ ಭಾವಗೀತೆಗಳನ್ನು ಓದುವ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಕಲೆ ಕರಗತ ಮಾಡಿ ತಾಲೂಕಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದರು.

Advertisement

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಿರಣಗೆರೆ ಜಗದೀಶ್‌ ಮಾತನಾಡಿ, ಎಲ್‌. ನರಸಿಂಹಯ್ಯ ಮಕ್ಕಳಿಗೆ ಬಹಳ ನೆಚ್ಚಿನ ಗುರುಗಳಾಗಿದ್ದರು. ಮಕ್ಕಳಿಗೆ ವಾರ್ತೆಗಳನ್ನು ಓದುವ ಹವ್ಯಾಸ ಬೆಳೆಸಿ ಅವರಿಗೆವೇದಿಕೆ ಅಲ್ಲಿ ನಿಂತು ಮಾತನಾಡುವ ಶಕ್ತಿತುಂಬುತ್ತಿದ್ದರು ಎಂದು ಸ್ಮರಿಸಿಕೊಂಡರು.

ಪುಸ್ತಕ ಓದುವ ಅಭ್ಯಾಸ ಬೆಳೆಸಿ: ಜಯಲಕ್ಷ್ಮೀ :

ನರಸಿಂಹಯ್ಯ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕನ್ನಡ ನಾಡಿಗೆ ಸಂದ ಗೌರವ. ಇವರ ಶಿಷ್ಯಂದಿರು ಪ್ರಪಂಚದಾದ್ಯಂತ ಉತ್ತಮ ಸ್ಥಾನಮಾನ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಪಿಜಿಆರ್‌ ಸಿಂಧ್ಯಾ ಅವರಿಗೂ ಇವರು ಗುರುಗಳಾಗಿದ್ದರು. ಇವರನ್ನು ಮಾದರಿಯಾಗಿಟ್ಟುಕೊಂಡು ಅನೇಕರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಬರವಣಿಗೆ ಅಭ್ಯಾಸವನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಕಲಿಸಿಕೊಡಬೇಕು. ಜೊತೆಗೆ ಪುಸ್ತಕ ಓದುವ ಅಭ್ಯಾಸ ಬೆಳೆಸಬೇಕು. ಮಕ್ಕಳು ತಪ್ಪು ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮೀ ಹೇಳಿದರು.

ಮಕ್ಕಳನ್ನು ಕನ್ನಡದಿಂದ ದೂರಸರಿಸುವ ಯತ್ನ :

ಕನ್ನಡ ಭಾಷೆ ಅಗತ್ಯ, ಆದ್ಯತೆಯ ಭಾಷೆಯಾಗಿ ಶಾಲಾ ಶಿಕ್ಷಣದಲ್ಲಿ ಕಂಡುಬರುತ್ತಿಲ್ಲ. ಹಿರಿಯರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಕನ್ನಡ ಅಗತ್ಯ ಭಾಷೆ ಆಗಬೇಕಿತ್ತು. ಗ್ರಾಮಾಂತರ ಕನ್ನಡ ಶಾಲೆಗಳಲ್ಲಿ ಕನ್ನಡ ಅಗತ್ಯ ಭಾಷೆಯಾಗಿದೆ. ಆದರೆ, ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ಮತ್ತು ಕೆಲವು ವಿದ್ಯಾವಂತ, ಸ್ಥಿತಿವಂತ ಪೋಷಕರಿಂದ ಮಕ್ಕಳನ್ನು ಕನ್ನಡದಿಂದ ದೂರ ಸರಿಸುವ ವಿದ್ಯಮಾನ ನಡೆಯುತ್ತದೆ. ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದು ಕನ್ನಡ ಪ್ರಥಮ ಭಾಷೆ ಮತ್ತು ಕನ್ನಡ ಮಾಧ್ಯಮದಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ವಿಭಾಗದಲ್ಲಿ ಮತ್ತು ಸರ್ಕಾರದ ಉದ್ಯೋಗಗಳಲ್ಲಿ ಆದ್ಯತೆ ನೀಡಿ ಪ್ರೋತ್ಸಾಹಿಸಿದರೆ ಅವರ ಅನುಕೂಲದ ಜೊತೆಗೆ ಭಾಷೆಗೂ ಅಗತ್ಯತೆ ಕಲ್ಪಿಸಿದಂತಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಲ್‌. ನರಸಿಂಹಯ್ಯ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next