Advertisement

10 ಲಕ್ಷ ರೂ. ಕಳ್ಳತನಗೈದ ಆರೋಪಿಯ ಸೆರೆ

11:04 PM Mar 24, 2023 | Team Udayavani |

ಉಪ್ಪಿನಂಗಡಿ: ವ್ಯಕ್ತಿಯೋರ್ವರ ಕೈಯಲ್ಲಿದ್ದ 10 ಲಕ್ಷ ರೂ. ಹಣದ ಕಟ್ಟನ್ನು ಕಿತ್ತೂಯ್ದ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

ಕಡವಿನಬಾಗಿಲು ಮನೆ ನಿವಾಸಿ ಅಬ್ದುಲ್‌ ಖಾದ್ರಿ ಎಂಬವರ ಪುತ್ರ ಮುಸ್ತಾಫ‌ (41) ನ್ಯಾಯಾಂಗ ಬಂಧನಕ್ಕೊಳಗಾದ ವ್ಯಕ್ತಿ. ಈತ ಇಳಂತಿಲ ಗ್ರಾಮದ ಕಾಯರ್ಪಾಡಿ ಮನೆ ನಿವಾಸಿ ಮಹಮ್ಮದ್‌ ಕೆ. ಎಂಬವರು 10 ಲಕ್ಷ ರೂ. ಹಣದ ಕಟ್ಟನ್ನು ತನ್ನ ದ್ವಿಚಕ್ರ ವಾಹನದ ಸೀಟಿನಡಿಯಲ್ಲಿ ಇಡಲೆತ್ನಿಸುವಾಗ ಹಿಂಬದಿಯಿಂದ ಮಿಂಚಿನಂತೆ ಬಂದು ಹಣದ ಕಟ್ಟನ್ನು ಎಳೆದುಕೊಂಡು ಹೋಗಿ ಪರಾರಿಯಾಗಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್‌. ಅವರ ನೇತೃತ್ವದಲ್ಲಿ ತನಿಖೆ ನಡೆಸಿ, ಗುರುವಾರ ಈತನನ್ನು ಬಂಧಿಸಿ, ಆತನಲ್ಲಿದ್ದ 9 ಲಕ್ಷ ರೂ.ವನ್ನು ವಶಪಡಿಸಿಕೊಂಡಿದ್ದಾರೆ. ಮಹಮ್ಮದ್‌ ಕೆ. ಅವರು ತನ್ನ ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ಈ ಹಣವನ್ನು ಹಿಡಿದುಕೊಂಡು ಹೋದಾಗ ಈ ಘಟನೆ ನಡೆದಿತ್ತು.

ಮುಸ್ತಾಫ‌ ಈ ಹಿಂದೆ ಹಾಸನ ಜಿಲ್ಲೆಯಲ್ಲಿ ನಡೆದ ಲಾರಿ ಕಳವು ಪ್ರಕರಣದ ಆರೋಪಿ ಕೂಡ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next