Advertisement

1120 ರೈತರಿಗೆ 1.33 ಕೋಟಿ ವಿಮೆ ಹಣ ಜಮೆ

05:28 PM Jul 07, 2022 | Team Udayavani |

ದೇವದುರ್ಗ: ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬೆಳೆಗಳು ನೋಂದಾಯಿಸಿದ ರೈತರಿಗೆ ವಿಮೆಬೆಳೆ ಹಣ ಜಮಾ ಮಾಡಲಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಫಸಲ ಭೀಮಾ ಯೋಜನೆ ನೂರಾರು ರೈತರಿಗೆ ಅನುಕೂಲವಾಗಿದೆ.

Advertisement

ಕೆಲ ರೈತರಿಗೆ ತಾಂತ್ರಿಕ ಸಮಸ್ಯೆ ಹಿನ್ನೆಲೆ ವಿಮೆ ಹಣ ಜಮಾ ವಿಳಂಬವಾಗಿದೆ. ಪ್ರಸ್ತಕ ವರ್ಷ ಮುಂಗಾರು ಹಂಗಾಮಿನಲ್ಲಿ ಫಸಲ ಭೀಮಾ ಯೋಜನೆಯಡಿ ಬೆಳೆಗಳ ನೋಂದಣಿ ಪ್ರಕ್ರಿಯೆ ಈ ತಿಂಗಳು 30ರ ವರೆಗೆ ಕಾಲ ಅವಕಾಶ ನೀಡಲಾಗಿದೆ. ಈ ಯೋಜನೆಯಡಿ ಕೆಲ ಆಗುತ್ತಿರುವ ಲೋಪದೋಷಗಳು ಸರಿಪಡಿಸಲು ಅಧಿಕಾರಿಗಳು ಜಾಗೃತಿ ಮೂಲಕ ತಿಳಿಹೇಳಲಾಗುತ್ತಿದೆ.

1.33 ಕೋಟಿ ಜಮಾ: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ನೋಂದಾಯಿಸಿದ ನೂರಾರು ರೈತರಿಗೆ ವಿಮೆ ಹಣ ಜಮಾ ಮಾಡಲಾಗಿದೆ. ಮೂರು ಸಾವಿರ ಅಧಿಕ ರೈತರು ನೋಂದಾಯಿಸಿದ್ದರು. ಆದರೀಗ 1120 ರೈತರಿಗೆ 1.33 ಕೋಟಿ ರೂ. ಬೆಳೆ ವಿಮೆ ಹಣ ಜಮೆ ಮಾಡಲಾಗಿದೆ. ಕೆಲ ತಾಂತ್ರಿಕ ಸಮಸ್ಯೆ ಹಿನ್ನೆಲೆ ಹಣ ಪಾವತಿಗೆ ಸಮಸ್ಯೆ ತಂದಿದೆ.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಪಾವತಿ ಮಾಡಿದ 1120 ರೈತರಿಗೆ 1.33 ಕೋಟಿ ರೂ. ಜಮಾ ಆಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಆರಂಭವಾಗಿದೆ. ಫಸಲ ಭೀಮಾ ಯೋಜನೆ ರೈತರಿಗೆ ಅನುಕೂಲವಾಗಿದೆ. -ಬಸವರಾಜ ಸಿದ್ದರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next