Advertisement

1.08 ಲಕ್ಷ ಕೋ.ರೂ. Subsidyಗೆ ಅನುಮೋದನೆ

11:53 PM May 17, 2023 | Team Udayavani |

ಹೊಸದಿಲ್ಲಿ: 2023-24ರ ಬಿತ್ತನೆ ಋತುವಿಗಾಗಿ ಕೇಂದ್ರ ಸಂಪುಟ ಸಭೆ ಬುಧವಾರ 1.08 ಲಕ್ಷ ಕೋಟಿ ರೂ. ರಸಗೊಬ್ಬರ ಸಬ್ಸಿಡಿಗೆ ಅನುಮೋದನೆ ನೀಡಿದೆ. ಈ ಕ್ರಮವು ರಸಗೊಬ್ಬರಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ಏರಿಕೆಯಾಗದಂತೆ ತಡೆಯುತ್ತದೆ. “ಈ ವರ್ಷದ ಎಪ್ರಿಲ್‌-ಸೆಪ್ಟೆಂಬರ್‌ ಬಿತ್ತನೆ ಋತುವಿಗಾಗಿ, ಯೂರಿಯಾಕ್ಕೆ 70,000 ಕೋಟಿ ರೂ. ಸಬ್ಸಿಡಿ ಮತ್ತು ಡಿಎಪಿ (ಡಿ-ಅಮೋನಿಯಂ ಫಾಸ್ಪೇಟ್‌)ಗಾಗಿ 38,000 ಕೋಟಿ ರೂ. ಸಬ್ಸಿಡಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೀಗಾಗಿ ರಸಗೊಬ್ಬರ ಚಿಲ್ಲರೆ ಮಾರಾಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ” ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಮನ್‌ಸುಖ್‌ ಮಾಂಡವೀಯಾ ತಿಳಿಸಿದ್ದಾರೆ. ಪ್ರಸ್ತುತ ಪ್ರತೀ ಬ್ಯಾಗ್‌ ಯೂರಿಯಾ ಬೆಲೆ 276 ರೂ. ಹಾಗೂ ಡಿಎಪಿ ಪ್ರತೀ ಬ್ಯಾಗ್‌ ಬೆಲೆ 1,350 ರೂ. ಇದೆ. ಸಬ್ಸಿಡಿಯಿಂದ ಸುಮಾರು 12 ಕೋಟಿ ರೈತರಿಗೆ ಉಪಯೋಗವಾಗಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next