Advertisement

ಲಕ್ಷ್ಮೀಸಾಗರ ಕೆರೆಯ ಬಳಿ ತ್ಯಾಜ್ಯಕ್ಕೆ ಬೆಂಕಿ

05:29 PM Oct 05, 2021 | |

ಕೋಲಾರ: ತಾಲೂಕಿನ ಲಕ್ಷ್ಮೀಸಾಗರ ಕೆರೆಯಲ್ಲಿ ಕೋಲಾರ ಮತ್ತು ಹೊಸಕೋಟೆ ನಗರಸಭೆಯವರು ಕಸ ಹಾಕಿ ವಾಯು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿದೆ.

Advertisement

ತಾಲೂಕಿನ ಲಕ್ಷ್ಮೀಸಾಗರ ಅಕ್ರಮ ಕ್ವಾರೆಯನ್ನಾಗಿ ಆಯ್ಕೆ ಮಾಡಿಕೊಂಡು ಹಳ್ಳಿಗಳನ್ನು ಸರ್ವನಾಶ ಮಾಡಲು ಮುಂದಾಗಿರುವುದನ್ನು ತಪ್ಪಿಸಲು ಕ್ವಾರಿಯಿಂದ ಒಂದು ಕಿ.ಮೀ.ಅಂತರದ ಬೈಪಾಸ್‌ ಮುಖ್ಯರಸ್ತೆಯಲ್ಲಿಯೇಪೆಂಡಾಲ್‌ ಹಾಕಿ ಸಂಘದವರು ಕಾವಲು ಕಾಯುತ್ತಿದ್ದರೆ, ಇಲ್ಲಿನ ಕ್ವಾರಿಗೆ ಮಾಲಿಕರು ಎಂದು ಹೇಳಿಕೊಳ್ಳುತ್ತಿರುವ ವಕೀಲರಾದ ಚಂದ್ರಪ್ಪ, ಸೋಮಶೇಖರ್‌ ತಮ್ಮನಾದ ಉದಯ್‌ ಕುಮಾರ್‌ ಕ್ವಾರಿಯಲ್ಲಿರುವ ಸಾಕ್ಷಿಗಳನ್ನು ನಾಶಪಡಿಸಲು ಬೆಂಕಿ ಅಂಟಿಸಿದ್ದಾರೆ ಅವರ ವಿರುದ್ಧ ಕ್ರಮಕೈಗೊಳ್ಳಲು ರೈತ ಸಂಘದ ರಾಜ್ಯಾಧ್ಯಕ್ಷ ಬಿ.ನಾರಾಯಣಸ್ವಾಮಿ ಒತ್ತಾಯಿಸಿದರು.

ಇದನ್ನೂ ಓದಿ;- RSS ಎಲ್ಲಿರುತ್ತದೆಯೋ ಅಲ್ಲಿ ಒಳ್ಳೆಯ ಕೆಲಸಗಳಾಗುತ್ತವೆ: ಎಚ್ ಡಿಕೆಗೆ ರವಿ ಕುಮಾರ್ ಟಾಂಗ್

ಬೆಂಕಿ ಉರಿಯುತ್ತಿದ್ದನ್ನು ಕಂಡ ರೈತ ಮುಖಂಡರು, ಸ್ಥಳದಲ್ಲಿಯೇ ಇದ್ದ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ, ಸಾಕ್ಷಿ ಕಾಪಾಡಿದ ಅಗ್ನಿಶಾಮಕ ದಳಕ್ಕೆ ರೈತ ಸಂಘ ಧನ್ಯವಾದ ತಿಳಿಸಿತು. ಸ್ಥಳಕ್ಕೆ ವೇಮಗಲ್‌ ಇನ್ಸ್‌ಪೆಕ್ಟರ್‌ ಶಿವರಾಜ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next