Advertisement

ಬಿಸಿ ನೀರಿನ ಬುಗ್ಗೆ ಬೆಂದ್ರ್ ತೀರ್ಥಕ್ಕೂ ತಟ್ಟಿದ ಬರಗಾಲ

10:59 PM Jun 02, 2019 | Suhan S |

ಈಶ್ವರಮಂಗಲ: ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬರಗಾಲ ಹೊಡೆತ ನೀಡಿದೆ. ಇದಕ್ಕೆ ಒಂದು ಉದಾಹರಣೆ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ತಾಣವಾದ ಇರ್ದೆ ಗ್ರಾಮದ ಬೆಂದ್ರ್ ತೀರ್ಥ. ಬೆಂದ್ರ್ ತೀರ್ಥ ಈ ಬಾರಿ ಸಂಪೂರ್ಣ ಒಣಗಿ ಹೋಗಿದೆ. ನೀರಿಲ್ಲದ ಕಾರಣ ಕೆರೆ ನೋಡಲು ಯಾತ್ರಿಕರು ಬರುತ್ತಿಲ್ಲ.

Advertisement

ಐತಿಹಾಸಿಕ ಸ್ಥಳ
ಸೀರೆ ನದಿಯ ತಟದಲ್ಲಿ ಪ್ರಕೃತಿ ರಮಣೀಯ ವಾದ ಸ್ಥಳದಲ್ಲಿ ಇರುವ ಇದರ ಸೌಂದರ್ಯವನ್ನು ಮಳೆಗಾಲದಲ್ಲಿ ಸವಿದಷ್ಟು ಸಾಲದು. ಅಂತಹ ವಾತಾವರಣ ಇಲ್ಲಿನದ್ದು. ಇಲ್ಲಿ ಬಿಸಿ ನೀರು ಇರುವ ಕಾರಣಕ್ಕೆ ಇದೊಂದು ಪವಿತ್ರ ಹಾಗೂ ಐತಿಹಾಸಿಕ ಸ್ಥಳವಾಗಿ ಪರಿಗಣಿತವಾಗಿದೆ. ಸಲ್ಪಟ್ಟಿದೆ. ವಿಶೇಷ ದಿನಗಳಲ್ಲಿ ಇಲ್ಲಿ ತೀರ್ಥ ಸ್ನಾನವೂ ನಡೆಯುತ್ತದೆ. ಕೆರೆಯ ಪಕ್ಕದಲ್ಲಿ ಯಾವಾಗ ಕೊಳವೆ ಬಾವಿಗಳನ್ನು ತೆಗೆದರೋ ಅಂದಿನಿಂದ ಕೆರೆಯ ಬಿಸಿ ನೀರು ಬರಿದಾಗಿದೆ. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರು ತುಂಬುವ ವೇಳೆ ಮತ್ತೆ ಕೊಳ ತುಂಬುತ್ತದೆ. ಮಳೆ ಇರಲಿ, ಚಳಿ ಇರಲಿ ಈ ಕೊಳದ ನೀರು ಸದಾ ಬಿಸಿಯಾಗಿಯೇ ಇರುತ್ತದೆ. ಇದರ ನೀರು ಬಿಸಿಯಾಗಲು ವೈಜ್ಞಾನಿಕ ಕಾರಣವೇ ಇದೆ. ಬಿಸಿ ನೀರು ಇರುವ ಕಾರಣಕ್ಕೆ ಈ ಸ್ಥಳಕ್ಕೆ ತುಳುವಿನಲ್ಲಿ ಬೇಂದ್ರ್ ತೀರ್ಥ ಎಂದು ಕರೆಯುತ್ತಿದ್ದು, ಸ್ಥಳಕ್ಕೆ ಧಾರ್ಮಿಕ ಪಾವಿತ್ರ್ಯವೂ ಇದೆ.

ಇಲ್ಲಿಗೆ ತೆರಳುವ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿದ್ದು, ಹೊಂಡ-ಗುಂಡಿಗಳಿಂದ ತುಂಬಿರುವ ಕಾರಣ ಯಾತ್ರಿಕರ ಸಂಖ್ಯೆಯೂ ಕಡಿಮೆ ಯಾಗಿದೆ. ಬೇಸಗೆಯಲ್ಲಿ ಯಾತ್ರಿಕರು ಬರುವ ವೇಳೆ ಕೊಳದಲ್ಲಿ ನೀರು ಬತ್ತಿ ಹೋಗಿರುತ್ತದೆ. ಮಳೆಗಾಲದಲ್ಲಿ ನೀರು ಇದ್ದರೂ ರಸ್ತೆ ಸಮರ್ಪಕವಾಗಿಲ್ಲದ ಕಾರಣ ಯಾತ್ರಿಕರು ಬರಲು ಕಷ್ಟವಾಗುತ್ತದೆ. ಕೆಲವೊಂದು ವಿಶೇಷ ದಿನಗಳಲ್ಲಿ ಕೊಳದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ಕಾಯಿಲೆ ವಾಸಿಯಾಗುತ್ತವೆ ಎನ್ನುವ ನಂಬಿಕೆ ಇದೆ. ನವ ದಂಪತಿಗಳು ಬಂದು ಪೂಜೆ ಸಲ್ಲಿಸುತ್ತಾರೆ. ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿಂದ ಪ್ರಸಿದ್ಧಿ ಪಡೆದಿರುವ ಬೆಂದ್ರ್ ತೀರ್ಥವನ್ನು ಅಭಿವೃದ್ಧಿಪಡಿಸಬೇಕಾದ ಜವಾಬ್ದಾರಿ ಜಿಲ್ಲಾಡಳಿತಕ್ಕಿದ್ದು, ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತರುವ ಮೂಲಕ ಉಳಿಸುವ ಕಾರ್ಯ ಆಗಬೇಕಿದೆ. ಬೆಂದ್ರ್ ತೀರ್ಥ ಪ್ರವಾಸಿ ತಾಣವಾಗಿ ಉಳಿ ಯಲಿಲ್ಲ ಅಥವಾ ನಾವು ಉಳಿಸಲಿಲ್ಲ. ಅಲ್ಲಿನ ಬಿಸಿ ನೀರು ತಂಪಾದಾಗಲೂ ನಾವು ಮಾತನಾಡಲಿಲ್ಲ. ಈಗ ಕೆರೆಯೇ ಬತ್ತಿ ಹೋಗಿದೆ. ಪರಿಸರದಲ್ಲಿರುವ ಮಣ್ಣು ಬಿಸಿಯಾಗಿದೆ. ಆದರೂ ಕಾಳಜಿ ತೋರಿ ಸುತ್ತಿಲ್ಲ ಎಂದು ಪ್ರವಾಸಿಗರು ಬೇಸರ ವ್ಯಕ್ತ ಪಡಿಸುತ್ತಾರೆ.

ಗ್ರಾ.ಪಂ. ನಿರ್ಣಯಕ್ಕೆ ಬೆಲೆಯೇ ಇಲ್ಲ!
ಪ್ರಸಿದ್ಧಿ ಪಡೆದ ಬಿಸಿ ನೀರಿನ ಬುಗ್ಗೆ ಬೇಂದ್ರ್ ತೀರ್ಥವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲು ಪಂಚಾ ಯತ್‌ ವತಿಯಿಂದ ಸಂಬಂಧಿ ಸಿದ ಇಲಾಖೆ, ಜನಪ್ರತಿನಿಧಿ ಗಳಿಗೆ ನಿರ್ಣಯ ಕಳಿಸಲಾಗಿತ್ತು. ಆದರೆ ಅಧಿಕಾರಿಗಳು, ಇಲಾಖೆಗಳು ಸ್ಪಂದಿಸದೇ ಇರುವುದು ಈ ಪ್ರದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಪ್ರವಾಸಿ ಕೇಂದ್ರವಾಗಲಿಲ್ಲ
ಸ್ಥಳವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕೆಂಬ ಆಗ್ರಹ ಕೇಳುತ್ತಿದ್ದರೂ ಈವರೆಗೂ ಅದು ಕೈಗೂಡಿಲ್ಲ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕೊಳವನ್ನು ದುರಸ್ತಿ ಮಾಡಿ ಸುತ್ತಲೂ ಕಲ್ಲಿನ ಆವರಣವನ್ನು ನಿರ್ಮಿಸಲಾಗಿದೆ. ವಿಶ್ರಾಂತಿ ಕೊಠಡಿ ಮತ್ತು ಬಟ್ಟೆ ಬದಲಿಸುವ ಕೊಠಡಿಗಳನ್ನು ನಿರ್ಮಿಸಲಾಗಿದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಅವು ಉಪಯೋಗ ಶೂನ್ಯವಾಗಿದೆ. ಕೆಲವೊಂದು ಕೋಣೆಗಳು ಮುರಿದು ಬಿದ್ದು ವರ್ಷಗಳೇ ಕಳೆದಿದೆ. ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡುವುದೇ ಇಲ್ಲ.

Advertisement

ಗ್ರಾ.ಪಂ.ನಿಂದ ಪೂರ್ಣ ಸಹಕಾರ
ಬೆಂದ್ರತೀರ್ಥ ಅಭಿವೃದ್ಧಿಗೆ ಸಂಬಂಧಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವ ಮಾಡಲಾಗುವುದು. ರಸ್ತೆ ಅಭಿವೃದ್ಧಿಗೆ ಅನುದಾನ ಇರಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರವಾಸಿ ತಾಣವಾಗಿ ಮಾಡಲು ಇಲಾಖೆಗೆ ಪಂಚಾಯತ್‌ನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು.
– ಶೈಲಜಾ, ಪಿಡಿಒ, ಬೆಟ್ಟಂಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next