Advertisement

ನಾವುಂದ-ಬಡಾಕೆರೆ : ಇಳಿಯದ ನೆರೆ ನೀರು

08:32 AM Aug 10, 2022 | Team Udayavani |

ಕುಂದಾಪುರ : ಕಳೆದ 3-4 ದಿನಗಳಿಂದ ಬೈಂದೂರು, ಕುಂದಾಪುರದಾದ್ಯಂತ ಎಡೆ ಬಿಡದೇ ಮಳೆಯಾಗುತ್ತಿದ್ದು, ಕೊಲ್ಲೂರು ಘಾಟಿ ಪ್ರದೇಶದಲ್ಲೂ ನಿರಂತರ ಮಳೆ ಯಿಂದಾಗಿ ಸೌಪರ್ಣಿಕಾ ನದಿ ಪಾತ್ರದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ನೀರು ಇಳಿಯದೇ, ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಸಂತ್ರಸ್ತರು ಜಾನು ವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಅಂಗಳದಲ್ಲಿರುವ ಬಾವಿಗಳೂ ಮುಳುಗಡೆಯಾಗಿರುವುದರಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮನೆಯೊಳಗೆ ಹಾವು, ಇನ್ನಿತರ ಚಲಚರಗಳು ಬರಲಾರಂಭಿಸಿವೆ.

ಇದನ್ನೂ ಓದಿ : ಮಣೂರು ಪಡುಕರೆ, ಕೋಡಿಕನ್ಯಾಣ ಕಡಲ್ಕೊರೆತ; ವ್ಯಾಪಕ ಹಾನಿ ಭೀತಿ

Advertisement

Udayavani is now on Telegram. Click here to join our channel and stay updated with the latest news.

Next