Advertisement

ನಾಡದೋಣಿ ಮೀನುಗಾರಿಕೆ ಸೀಮೆ ಎಣ್ಣೆ ಸಮರ್ಪಕ ವಿತರಣೆಗೆ ಕ್ರಮ: ಯಶ್‌ಪಾಲ್‌

11:59 PM Dec 03, 2022 | Team Udayavani |

ಮಲ್ಪೆ : ನಾಡದೋಣಿ ಮೀನುಗಾರರಿಗೆ ನಿರಂತರ ಸೀಮೆ ಎಣ್ಣೆ ಪೂರೈಸಲು ಸರಕಾರ ಕ್ರಮ ಕೈಗೊಂಡಿರುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ತಿಳಿಸಿದ್ದಾರೆ.

Advertisement

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ನಾಡದೋಣಿ ಮೀನುಗಾರಿಕೆ ಸೀಮೆ ಎಣ್ಣೆ ವಿತರಣೆಗೆ ಅನುದಾನ ಮಂಜೂರು ಮಾಡಿವೆ. ಇಂಧನ ಕಂಪೆನಿಗಳಲ್ಲಿ ದಾಸ್ತಾನು ಕೊರತೆಯ ಕಾರಣ ಸೀಮೆ ಎಣ್ಣೆ ವಿತರಣೆಯಲ್ಲಿ ಸಮಸ್ಯೆಯಾಗಿತ್ತು. ನಾಡದೋಣಿ ಮೀನುಗಾರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಶನಿವಾರದಿಂದಲೇ ಕೈಗಾರಿಕೆ ಬಳಕೆಯ ಸೀಮೆ ಎಣ್ಣೆಯನ್ನು ಆವಶ್ಯಕತೆ ಇದ್ದಲ್ಲಿ ನಾಡದೋಣಿ ಮೀನುಗಾರರಿಗೆ ಮೀಸಲಿರಿಸುವ ಬಗ್ಗೆ ಪ್ರಕ್ರಿಯೆಗೆ ಮುಂದಾಗಿದೆ ಎಂದು ಹೇಳಿದ್ದಾರೆ.

ನಾಡದೋಣಿ ಮೀನುಗಾರರ ಸೀಮೆ ಎಣ್ಣೆ ಸಮರ್ಪಕ ವಿತರಣೆಗೆ ವಿಶೇಷ ಮುತುವರ್ಜಿ ವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೀನುಗಾರಿಕೆ ಸಚಿವ ಎಸ್‌. ಅಂಗಾರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಂಸದ ಬಿ. ವೈ. ರಾಘವೇಂದ್ರ, ಕರಾವಳಿ ಜಿಲ್ಲೆಯ ಎಲ್ಲ ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಯಶ್‌ಪಾಲ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

Advertisement

Udayavani is now on Telegram. Click here to join our channel and stay updated with the latest news.

Next