Advertisement

ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಯತ್ನಾಳಗೆ ಜಿಗಜಿಣಗಿ ಎಚ್ಚರಿಕೆ

09:45 PM Mar 02, 2021 | sudhir |

ವಿಜಯಪುರ : ಕಳೆದ 45 ವರ್ಷಗಳಿಂದ ರಾಜಕೀಯದಲ್ಲಿರುವ ನಾನು ಯಾರ ತಂಟೆಗೂ ಹೋಗಿಲ್ಲ, ನನ್ನ ತಂಟೆಗೆ ಯಾರೇ ಬಂದರೂ ಸುಮ್ಮನಿರಲ್ಲ. ಹರಿಜನರು ಎಂದರ್ರೆ ಸುಮ್ಮನೆ ಅಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ಗುಡುಗಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿರುವ ಅವರು, ಹರಿಜನರು ಎಂದರೆ ಅಷ್ಟು ಸರಳವಲ್ಲ. ಹಾಗಂತ ನಾನು ಯಾರ ಹೆಸರು ಹೇಳಲ್ಲ, ಕೈಮುಗಿದು ಹೇಳುತ್ತೇನೆ ನನ್ನ ತಂಟೆಗೆ ಬರಬೇಡಿ. ನನ್ನ ಬಗ್ಗೆ ಅವರು ಪದೇ ಪದೇ ಮಾತನಾಡಿದರೆ, ಅನಗತ್ಯವಾಗಿ ನನ್ನನ್ನು ವಿರೋಧಿಸಿದರೆ ಸುಮ್ಮನೇ ಇರುವುದಿಲ್ಲ ಎಂಬುದನ್ನು ವಿರೋಧಿಗಳು ಅರಿಯಬೇಕು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ :ಹಿರೇಬೇವನೂರ ಗ್ರಾಮದಲ್ಲಿ ಶಾಟ್ ಸರ್ಕ್ಯೂಟ್ ಗೆ ಅಂಗಡಿಗಳು ಭಸ್ಮ

Advertisement

Udayavani is now on Telegram. Click here to join our channel and stay updated with the latest news.

Next