Advertisement

ಕರ್ತವ್ಯ ನಿರ್ವಹಿಸಿದ್ದ ಎಸಿಪಿ ಶಿವಕುಮಾರ್ ಎಸ್ ಎಂ ಹೃದಯಾಘಾತದಿಂದ ನಿಧನ

11:18 AM Apr 30, 2022 | Team Udayavani |

ಗಂಗಾವತಿ : ನಗರ ಪೋಲಿಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರಸ್ತುತ ಬೆಂಗಳೂರಿನಲ್ಲಿ ಎಸಿಪಿಯಾಗಿದ್ದ ಶಿವಕುಮಾರ್ ಎಸ್. ಎಂ. ಶನಿವಾರ ಬೆಳಗಿನ ಜಾವ 5.30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ .
ಮೃತ ಶಿವಕುಮಾರ್ ಅವರು ಓರ್ವ ಪುತ್ರ, ಓರ್ವ ಪುತ್ರಿ , ಪತ್ನಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ .
ಇವರು ಗಂಗಾವತಿ, ಕಂಪ್ಲಿ, ಹೊಸಪೇಟೆ,ಮುನಿರಾಬಾದ್ ಡ್ಯಾಮ್ ಹಾಗೂ ರಾಯಚೂರು ನಗರ ಪೋಲಿಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು . ಶುಕ್ರವಾರ ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪ್ರವಾಸದ ನಿಮಿತ್ತ ಕರ್ತವ್ಯ ನಿರ್ವಹಿಸಿ ರಾತ್ರಿ ಮನೆಗೆ ಆಗಮಿಸಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಸಿಪಿ ಶಿವಕುಮಾರ್ ಎಸ್ ಸಂ ನಿಧನಕ್ಕೆ ಡಿವೈಎಸ್ ಪಿ ರುದ್ರೇಶ್ ಉಜ್ಜನಕೊಪ್ಪ ಹಾಗೂ ಗಂಗಾವತಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .

Advertisement
Advertisement

Udayavani is now on Telegram. Click here to join our channel and stay updated with the latest news.

Next